ನಾನು ಎಲ್ಲಿ ಕರೆದೆ ನಿನ್ನ?

ನಾನು ಎಲ್ಲಿ ಕರೆದೆ ನಿನ್ನ?
ನೀನೆ ಬಂದೆ ಬೆನ್ನಿಗೆ
ಮುಗಿಲನೇರಿ ಅಲೆಯುತಿದ್ದ ನನ್ನ ಇಳಿಸಿ ಮಣ್ಣಿಗೆ

ಕಾಡಿ ಬೇಡಿ ಭಾಷೆ ಹೂಡಿ
ಹನಿ ಚಿಮ್ಮಿದೆ ಕಣ್ಣಲಿ
ಗಂಡು ಬರಿಯ ಬೆಂಡೆ ಹೇಳು? ರುಚಿ ಮೊಳೆಯಿತು ಹಣ್ಣಲಿ

ಹಾಲು ಜೇನು ಹಣ್ಣ ರಸದ
ಅಭಿ‍ಷೇಕವ ಸಲಿಸಿ
ರುಚಿ ಜಿನುಗುವ ತಿನಿಸ ಇತ್ತೆ ಕನಸಿನ ಮಳೆ ಕರೆಸಿ

ತಂಗಳು ಬಾಳಾಯಿತು ಸವಿ-
ಗೊಂದಲಗಳ ಹಾಡು
ಬಣ್ಣದ ಎಲೆ ಹೂ ತುಂಬಿದ, ಗುರಿ ಮರೆಸಿದ ಕಾಡು

ಗಣಿತ ಪಾಠವಾದ ಬಾಳ
ಭಾವಮಣಿತಕೊಲಿಸಿ
ತೊರೆದು ನಿಂತೆ ನನ್ನ ಹಂಗ, ನೆನಪ ಮಾತ್ರ ವರಿಸಿ

ನೀನು ನಿನ್ನ ಪ್ರೀತಿ ರೀತಿ
ಎಲ್ಲ ಗೂಢ ನನಗೆ
ಅರ್ಥ ಯಾಕೆ, ನಿತ್ಯ ಸ್ಮರಣೆ, ಗಂಗೆ ನೀನು ನನಗೆ
*****
ಪುಸ್ತಕ: ನಿನಗಾಗೇ ಈ ಹಾಡುಗಳು

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಮರುಭೂಮಿ
Next post ನಗೆ ಡಂಗುರ – ೧೦೮

ಸಣ್ಣ ಕತೆ

  • ಸ್ನೇಹಲತಾ

    ೧೫-೯-೧೯.. ಈಗ ಮನಸ್ಸಿಗೆ ನೆಮ್ಮದಿಯೆನಿಸುತ್ತಿದೆ. ಇಂದಿನಿಂದ ಮತ್ತೆ ನನ್ನ ದಿನಚರಿ ಬರೆಯುವ ಕಾರ್ಯಕ್ರಮವನ್ನು ಆರಂಭಿಸಬೇಕು. ದಿನಚರಿಯೆ ನನ್ನ ಸಹಧರ್ಮಿಣಿ; ನನ್ನ ಸಹ-ಸಂಚಾರಿ; ಅದೆ ನನಗೆ ಸಂತಸ ಕೊಡುವುದು.… Read more…

  • ಲೋಕೋಪಕಾರ!

    ಸಾಥಿ ಶಿವರಾವ ಅವರಿಗೆ ಬಹು ದೊಡ್ಡ ಚಿಂತೆ! ಅವರು ಅನೇಕ ಪ್ರಶ್ನೆಗಳನ್ನು ಬಹು-ಸರಳವಾಗಿ ಬಿಡಿಸುತ್ತಿದ್ದರು. ಪರೀಕ್ಷೆಯಲ್ಲಿ ಅನೇಕ ಪ್ರಶ್ನೆಗಳಿಗೆ ಉತ್ತರ ಬರೆದಿದ್ದಾರು. ಆದರೆ ಎಂತಹ ದೊಡ್ಡ ಪ್ರಶ್ನೆ… Read more…

  • ಏಡಿರಾಜ

    ಚಲೋ ವಂದು ಅರಸು ಮನಿ, ಗಂಡ-ಹೆಂಡ್ತಿ ದೊಡ್ಡ ಮನ್ತಾನದಲ್ ಆಳ್ಕತಿದ್ರು. ಆವಾಗೆ ಆ ಅರಸೂಗೆ ಗಂಡ್ ಹುಡ್ಗರಿಲ್ಲ. ಸಂತತ್ಯಲ್ಲ, ಇದ್ರದು ನಿಚ್ಚಾ ಕೆಲ್ಸಯೇನಪ್ಪ ಅರಸು ಹಿಂಡ್ತಿದು, ಮನಿ… Read more…

  • ಸಿಹಿಸುದ್ದಿ

    ಶ್ರೀನಿವಾಸ ದೇವಸ್ಥಾನದಲ್ಲಿ ಎರಡು ಪ್ರದಕ್ಷಿಣೆ ಹಾಕಿ ಮೂರನೇ ಪ್ರದಕ್ಷಿಣೆಗೆ ಹೊರಡುತ್ತಿದ್ದಂತೆಯೇ, ಯಾರೋ ಹಿಂದಿನಿಂದ "ಕಲ್ಯಾಣಿ," ಎಂದು ಕರೆದಂತಾಯಿತು. ಹಿಂತಿರುಗಿ ನೋಡಿದರೆ ಯಾರೋ ಮಧ್ಯ ವಯಸ್ಸಿನ ಮಹಿಳೆ ಬರುತ್ತಿದ್ದರು.… Read more…

  • ಜುಡಾಸ್

    "ಪೀಟರ್" "ಪ್ರಭು" "ಇನ್ನು ಮೂರುದಿನ ಮಾತ್ರ, ಪೀಟರ್. ಅನಂತರ...." ಮಾತು ಅರ್ಧಕ್ಕೆ ನಿಂತಿತು. ಯೇಸುಕ್ರಿಸ್ತ ತನ್ನ ಶಿಷ್ಯರೊಂದಿಗೆ ಕಾಲುನಡಿಗೆಯಲ್ಲಿ ಜೆರೂಸಲೆಂ ನಗರಕ್ಕೆ ನಡೆದು ಬರುತ್ತಿದ್ದ. ಹನ್ನೆರಡುಜನ ಶಿಷ್ಯರೂ… Read more…

cheap jordans|wholesale air max|wholesale jordans|wholesale jewelry|wholesale jerseys